← ಶ್ರೀಕೃಷ್ಣ
ನೆನೆದು ನೆನೆಸಿ ನಿಮ್ಮ
ನೆನೆದು ನೆನೆಸಿ ನಿಮ್ಮ
ತನುಮನದಲ್ಲಿ ಯೋಚನೆ ಮಾಡೀ
ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ
ನರನಾರಾಯಣನೀತ ಕೃಷ್ಣ
ಹರಿ ಹೃದ್ಭಾನು ಕಪಿಲನೀತ
ಹರಿನಾರಾಯಣೇನೀತ ಯೋಗೀ
ಶ್ವರ ತಾಪಸ ವೈಕುಂಠನೀತ
ಹರನಸಖ ಸ್ವಧಾಮನೀತ
ತುರಗವದನನೀತ ದಯಾ
ಕರುಣಿ ಸಾರ್ವಭೌಮನನೀತಾ ||1||
ಅಜಿತಯಜ್ಞನಾಮನೀತ
ಅಜಗೆ ಪೇಳಿದ ಹಂಸನೀತ
ಸುಜನಪಾಲ ವ್ಯಾಸ ವೀ
ರಜ ಮಹಿದಾಸ ದತ್ತನೀತ
ನಿಜ ಮಹಿಮ ಧನ್ವಂತ್ರಿ ಈತ
ತ್ರಿಜಗವಳೆದುಪೇಂದ್ರನೀತ
ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ ||2||
ಚಲುವ ಧರ್ಮಶೇತು ಈತ
ಬಲುವುಳ್ಳ ಶಿಂಶುಮಾರನೀತ
ಪೊಳೆವ ಮತ್ಸ್ಯ ಕೂರ್ಮವರಹ
ಲಲಿತನರಸಿಂಹನೀತ
ಬಲಿಗೊಲಿದ ವಾಮನ್ನನೀತ
ಕುಲವೈರಿ ರಘರಾಮನೀತ
ಕಳುವು ಮಾಡಿದನೀತ ಬತ್ತಲೆ
ಕಲಕಿ ರೂಪನಾದನೀತಾ ||3||
ಪುರುಷನಾಮಕನೀತ-ವಿ
ಸ್ತರ ವಾಸುದೇವ ಜಯಪತಿ ಸುಂ
ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ
ತುರ ವಿಂಶತಿ ಮೂರುತಿಯೇ ಈತ
ಮೆರೆವ ಅಜಾದಿ ನಾಮಕನೀತ
ವರ ಪಂಚಮೂರುತಿಯೇ ಈತಾ
ಎರಡೈದು ಮೇಲೊಂದನೀತ ||4||
ಪರಿಪರಿ ರೂಪ ಉಳ್ಳನೀತ
ಹೊರಗೆ ಒಳಗೆ ವ್ಯಾಪ್ತನಾಗಿ
ಸರಿಸರಿ ಬಂದ ತೆರದಿ ಜಗವ
ಸರಸದಲಿ ಆಡಿಪನೀತ
ಸ್ಮರಣೆ ಮಾಡಲು ಸಕಲ ಇಷ್ಟವ
ಕರೆದು ಕೊಡವನೀತ
ಶಿರಿಯರಸ ವಿಜಯವಿಠ್ಠಲನೀತ
ಮರಣ ಜನನರಹಿತ ನೀತ ||5||
ತನುಮನದಲ್ಲಿ ಯೋಚನೆ ಮಾಡೀ
ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ
ನರನಾರಾಯಣನೀತ ಕೃಷ್ಣ
ಹರಿ ಹೃದ್ಭಾನು ಕಪಿಲನೀತ
ಹರಿನಾರಾಯಣೇನೀತ ಯೋಗೀ
ಶ್ವರ ತಾಪಸ ವೈಕುಂಠನೀತ
ಹರನಸಖ ಸ್ವಧಾಮನೀತ
ತುರಗವದನನೀತ ದಯಾ
ಕರುಣಿ ಸಾರ್ವಭೌಮನನೀತಾ ||1||
ಅಜಿತಯಜ್ಞನಾಮನೀತ
ಅಜಗೆ ಪೇಳಿದ ಹಂಸನೀತ
ಸುಜನಪಾಲ ವ್ಯಾಸ ವೀ
ರಜ ಮಹಿದಾಸ ದತ್ತನೀತ
ನಿಜ ಮಹಿಮ ಧನ್ವಂತ್ರಿ ಈತ
ತ್ರಿಜಗವಳೆದುಪೇಂದ್ರನೀತ
ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ ||2||
ಚಲುವ ಧರ್ಮಶೇತು ಈತ
ಬಲುವುಳ್ಳ ಶಿಂಶುಮಾರನೀತ
ಪೊಳೆವ ಮತ್ಸ್ಯ ಕೂರ್ಮವರಹ
ಲಲಿತನರಸಿಂಹನೀತ
ಬಲಿಗೊಲಿದ ವಾಮನ್ನನೀತ
ಕುಲವೈರಿ ರಘರಾಮನೀತ
ಕಳುವು ಮಾಡಿದನೀತ ಬತ್ತಲೆ
ಕಲಕಿ ರೂಪನಾದನೀತಾ ||3||
ಪುರುಷನಾಮಕನೀತ-ವಿ
ಸ್ತರ ವಾಸುದೇವ ಜಯಪತಿ ಸುಂ
ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ
ತುರ ವಿಂಶತಿ ಮೂರುತಿಯೇ ಈತ
ಮೆರೆವ ಅಜಾದಿ ನಾಮಕನೀತ
ವರ ಪಂಚಮೂರುತಿಯೇ ಈತಾ
ಎರಡೈದು ಮೇಲೊಂದನೀತ ||4||
ಪರಿಪರಿ ರೂಪ ಉಳ್ಳನೀತ
ಹೊರಗೆ ಒಳಗೆ ವ್ಯಾಪ್ತನಾಗಿ
ಸರಿಸರಿ ಬಂದ ತೆರದಿ ಜಗವ
ಸರಸದಲಿ ಆಡಿಪನೀತ
ಸ್ಮರಣೆ ಮಾಡಲು ಸಕಲ ಇಷ್ಟವ
ಕರೆದು ಕೊಡವನೀತ
ಶಿರಿಯರಸ ವಿಜಯವಿಠ್ಠಲನೀತ
ಮರಣ ಜನನರಹಿತ ನೀತ ||5||