← ಶ್ರೀಕೃಷ್ಣ
ಯಚ್ಚತ್ತು ನಡಿ ಕಂಡ್ಯ ಮನವೇ
ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ
ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ
ಆಡದಿರಪವಾದಗಳನು ನೀನು
ಕೊಂಡಾಡದಿರು ಚಿಲ್ಲರೆ ದೈವಗಳನು
ಬೇಡಾಡದಿರುಭಯ ಸೌಖ್ಯಗಳನು ನೀ
ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು ||1||
ಹಾಳು ಹರಟಿಗ್ಹೋಗ ಬ್ಯಾಡ ಕಂಡ
ಕೂಳುಗಳನು ತಿಂದು ವಡಲ್ಹೊರಿಯ ಬೇಡ
ಕಾಲ ವೃಥಾ ಕಳಿಯ ಬ್ಯಾಡ ನಮ್ಮ |
ಪ್ರಾಲಬ್ಧ ಭೋಗಕ್ಕೆ ಮನಸೋಲ ಬ್ಯಾಡ,
ಶ್ರೀ ಹರಿ ದಯಮಾಡಾ ||2||
ನಾನು ಯೆಂಬುದು ಬಿಡು ಕಂಡ್ಯಾ ಎನ್ನ
ಮಾನಾಭಿಮಾನದ ಹರಿಯನ್ನು ಕಂಡ್ಯಾ
e್ಞÁನಿಗಳೊಡನಾಡು ಕಂಡ್ಯಾ ವಿಷಯ
ಜೇನೆಂದು ಮೆದ್ದರೆ ಅದು ವಿಷ ಕಂಡ್ಯಾ
ಬೀಳುವಿ ಯಮಕೊಂಡಾ ||3||
ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ
ಮಣ್ಣು ಕೂಡಿರುವರೆಗೊ ಕೇಳೊ ಮೂಢಾ
ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ
ಪೂರ್ಣಪ್ರಜ್ಞರ ಬೊಧ ತಿಳಿದುಕೊ ಗಾಢ,
ಮೈಮರೆದಿರ ಬ್ಯಾಡಾ||4||
ನರಜನ್ಮ ಬರುವೋದು ಕಷ್ಟ ಅಮ್ಮ
ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ
ಮರಳಿ ಬಾರದು ಉತ್ಕøಷ್ಟ ನಮ್ಮ
ಮಾರುತ ಮತವನೆ ಪೊಂದುವದೆ ದುರ್ಘಟ,
ಕೇಳೆಲವೋ ಮರ್ಕಟ ||5||
ಗೋವಿಪ್ರರ ಸೇವೆ ಮಾಡೋ ಸೋಹಂ
ಭಾವಗಳನು ಬಿಟ್ಟು ದಾಸತ್ವ ಕೂಡೋ
ಕೇವಲ ವೈರಾಗ್ಯ ಮಾಡೋ ಎಂಟು
ಝಾವಗಳಲಿ ಶ್ರೀ ಹರಿಯ ಕೊಂಡಾಡೊ,
ಲಜ್ಜೆಯನೀಡ್ಯಾಡೋ||6||
ಕಷ್ಟ ಪಡದೆ ಸುಖ ಬರದು ಕಂ
ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು
ದುಷ್ಟ ವಿಷಯದಾಶೆ ಜರಿದು ವಿಜಯ
ವಿಠಲನೆನ್ನದೆ ಮುಕ್ತಿಯು ಬರದೂ,
ಕೂಗೆಲವೊ ಬ್ಯಾದೆರದು ||7||
ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ
ಆಡದಿರಪವಾದಗಳನು ನೀನು
ಕೊಂಡಾಡದಿರು ಚಿಲ್ಲರೆ ದೈವಗಳನು
ಬೇಡಾಡದಿರುಭಯ ಸೌಖ್ಯಗಳನು ನೀ
ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು ||1||
ಹಾಳು ಹರಟಿಗ್ಹೋಗ ಬ್ಯಾಡ ಕಂಡ
ಕೂಳುಗಳನು ತಿಂದು ವಡಲ್ಹೊರಿಯ ಬೇಡ
ಕಾಲ ವೃಥಾ ಕಳಿಯ ಬ್ಯಾಡ ನಮ್ಮ |
ಪ್ರಾಲಬ್ಧ ಭೋಗಕ್ಕೆ ಮನಸೋಲ ಬ್ಯಾಡ,
ಶ್ರೀ ಹರಿ ದಯಮಾಡಾ ||2||
ನಾನು ಯೆಂಬುದು ಬಿಡು ಕಂಡ್ಯಾ ಎನ್ನ
ಮಾನಾಭಿಮಾನದ ಹರಿಯನ್ನು ಕಂಡ್ಯಾ
e್ಞÁನಿಗಳೊಡನಾಡು ಕಂಡ್ಯಾ ವಿಷಯ
ಜೇನೆಂದು ಮೆದ್ದರೆ ಅದು ವಿಷ ಕಂಡ್ಯಾ
ಬೀಳುವಿ ಯಮಕೊಂಡಾ ||3||
ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ
ಮಣ್ಣು ಕೂಡಿರುವರೆಗೊ ಕೇಳೊ ಮೂಢಾ
ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ
ಪೂರ್ಣಪ್ರಜ್ಞರ ಬೊಧ ತಿಳಿದುಕೊ ಗಾಢ,
ಮೈಮರೆದಿರ ಬ್ಯಾಡಾ||4||
ನರಜನ್ಮ ಬರುವೋದು ಕಷ್ಟ ಅಮ್ಮ
ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ
ಮರಳಿ ಬಾರದು ಉತ್ಕøಷ್ಟ ನಮ್ಮ
ಮಾರುತ ಮತವನೆ ಪೊಂದುವದೆ ದುರ್ಘಟ,
ಕೇಳೆಲವೋ ಮರ್ಕಟ ||5||
ಗೋವಿಪ್ರರ ಸೇವೆ ಮಾಡೋ ಸೋಹಂ
ಭಾವಗಳನು ಬಿಟ್ಟು ದಾಸತ್ವ ಕೂಡೋ
ಕೇವಲ ವೈರಾಗ್ಯ ಮಾಡೋ ಎಂಟು
ಝಾವಗಳಲಿ ಶ್ರೀ ಹರಿಯ ಕೊಂಡಾಡೊ,
ಲಜ್ಜೆಯನೀಡ್ಯಾಡೋ||6||
ಕಷ್ಟ ಪಡದೆ ಸುಖ ಬರದು ಕಂ
ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು
ದುಷ್ಟ ವಿಷಯದಾಶೆ ಜರಿದು ವಿಜಯ
ವಿಠಲನೆನ್ನದೆ ಮುಕ್ತಿಯು ಬರದೂ,
ಕೂಗೆಲವೊ ಬ್ಯಾದೆರದು ||7||