← ಶ್ರೀಕೃಷ್ಣ

ಬೆಲ್ಲದ ಕಟ್ಟೆಯ ಕಟ್ಟಿ

📂 ಶ್ರೀಕೃಷ್ಣ
✍️ ಪುರಂದರದಾಸ
🏷️ ಕೀರ್ತನೆಗಳು
🎵 ರಾಗ: ಸಿಂಹೇಂದ್ರಮಧ್ಯಮ
🥁 ತಾಳ: ಆದಿತಾಲ
ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೊಗುವುದೇನಯ್ಯಾ ||
ಏನು ನೋಡಿದರೇನು
ಏನು ಕೇಳಿದರೇನು |
ಮನದೊಳಗಿನ ತಾಮಸ ಮಾಣದನ್ನಕ ||
ಕೊಳಲ ದನಿಗೆ ಸರ್ಪ
ತಲೆದೂಗುವಂದದಿ
ಇದಕೇನು ಮದ್ದು
ಶ್ರೀಪುರಂದರ ವಿಟ್ಠಲಾ ||
← ಶ್ರೀಕೃಷ್ಣ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.