← ವಚನಗಳು
ಬಿಡು ಬಿಡು ಸಂಗವ, ಸುಡುಸುಡು ವಿಷಯವ,
ಬಿಡು ಬಿಡು ಸಂಗವ, ಸುಡುಸುಡು ವಿಷಯವ,
ಎನ್ನೊಡೆಯರು ಬಾಗಿಲಿಗೆ ಬಂದರು,
ತಡೆಯದಿರಾ ಮರುಳೆ.
ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ,
ಇದಕ್ಕೆ ಹಿಡಿಯದಿರು ಸೆರಗನು.
ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕ ನರಕ.
ಎನ್ನೊಡೆಯರು ಬಾಗಿಲಿಗೆ ಬಂದರು,
ತಡೆಯದಿರಾ ಮರುಳೆ.
ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ,
ಇದಕ್ಕೆ ಹಿಡಿಯದಿರು ಸೆರಗನು.
ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕ ನರಕ.