← ಶ್ರೀರಾಮಕೃಷ್ಣ

ಸಂಜೆಯಾಗಲು ತವಕಿಪುದು

📂 ಶ್ರೀರಾಮಕೃಷ್ಣ
✍️ ಕುವೆಂಪು
🏷️ ಕೀರ್ತನೆಗಳು
ಸಂಜೆಯಾಗಲು ತವಕಿಪುದು ಮನ ದಕ್ಷಿಣೇಶ್ವರ ಯಾತ್ರೆಗೆ |
ಪರಮಹಂಸರ ತೀರ್ಥವಾಣಿಯ ಪಂಚ ಅಮೃತದ ಪಾತ್ರೆಗೆ ||
ಗುಪ್ತದಫ್ತರ ಬರೆಯುತಿರ್ಪ ಮಹೇಂದ್ರಗುಪ್ತನ ನೋಡುವೆ |
ಪ್ರಶ್ನವರ್ಷವ ಕರೆಯುತಿರ್ಪ ನರೇಂದ್ರ ವಾದವನಾಲಿಪೆ ||
ಅತ್ತ ಕೇಶವಚಂದ್ರಸೇನನ ಭಕ್ತಿನಮನವ ಕಾಣುವೆ |
ಇತ್ತ ಮತ್ತ ಗಿರೀಶಘೋಷನ ಚಂದ್ರ ಚಿತ್ತದಿ ತೊಯ್ಯುವೆ ||
-ಕುವೆಂಪು
← ಶ್ರೀರಾಮಕೃಷ್ಣ ಕುವೆಂಪು ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.