← ಶ್ರೀಕೃಷ್ಣ
ಎಲೆ ಮನ ಮುರಾರಿಯನೆ ಕೊಂಡಾಡೋ
ಎಲೆ ಮನ ಮುರಾರಿಯನೆ ಕೊಂಡಾಡೋ ॥
ಕಾಲನ ದೂತರ ಕಾಲಿಗೆ ಬಿದ್ದರೆ
ನಾಳೆಗೆ ನಿಲುವರೇ ನೋಡೋ ॥
ಮಂದಿಯ ಮಾತಿಗೆ ಎಂದಿಗೂ ಮರುಗದೆ
ಮುಂದಿನ ಗತಿ ನೀ ನೋಡೋ ॥
ರಾಜೀವಾಕ್ಷ ಘನಶ್ಯಾಮ
ವಿಜಯ ವಿಟ್ಠಲನ ಪಾಡೋ ॥
ಕಾಲನ ದೂತರ ಕಾಲಿಗೆ ಬಿದ್ದರೆ
ನಾಳೆಗೆ ನಿಲುವರೇ ನೋಡೋ ॥
ಮಂದಿಯ ಮಾತಿಗೆ ಎಂದಿಗೂ ಮರುಗದೆ
ಮುಂದಿನ ಗತಿ ನೀ ನೋಡೋ ॥
ರಾಜೀವಾಕ್ಷ ಘನಶ್ಯಾಮ
ವಿಜಯ ವಿಟ್ಠಲನ ಪಾಡೋ ॥