← ಶ್ರೀಕೃಷ್ಣ
ಮನಸು ಕರಗದೇ ಸ್ವಾಮಿ
ಮನಸು ಕರಗದೇ ಸ್ವಾಮಿ॥
ದೀನನಾಗಿ ನಿನ್ನ ಪಾದವನ್ನು ನಂಬಿದೆನೋ ಸ್ವಾಮಿ ॥
ಒಡಲಿಗೋಸುಗವಾಗಿ ಪರರ
ಅಡಿಗಳಿಗೆ ನಮಿಸಿ ಅವರ
ಬಿರುನುಡಿಗಳ ಕೇಳಲಾರೆ
ಬೇಡಲಾರೆ ಮುರಾರೇ ॥
ಜನನಿ ಜನಕ ನೀನೇ ಎಂದು
ನಿನ್ನ ನಂಬಿದೆನೋ ಬಂಧು
ಎನ್ನ ಪಾಲಿಸೋ ಬೇಗ ಬಂದು
ಮನ್ನಿಸಯ್ಯ ಕೃಪಾಸಿಂಧು ॥
ದಿನವು ಕಳೆದು ಹೋಯಿತಲ್ಲಾ
ಪ್ರಾಣೇಶ ವಿಟ್ಠಲಾ
ಮನ್ನಿಸುವರು ಒಬ್ಬರಿಲ್ಲ
ಕಾಯೋ ಬಾಲಗೋಪಾಲ ॥
ದೀನನಾಗಿ ನಿನ್ನ ಪಾದವನ್ನು ನಂಬಿದೆನೋ ಸ್ವಾಮಿ ॥
ಒಡಲಿಗೋಸುಗವಾಗಿ ಪರರ
ಅಡಿಗಳಿಗೆ ನಮಿಸಿ ಅವರ
ಬಿರುನುಡಿಗಳ ಕೇಳಲಾರೆ
ಬೇಡಲಾರೆ ಮುರಾರೇ ॥
ಜನನಿ ಜನಕ ನೀನೇ ಎಂದು
ನಿನ್ನ ನಂಬಿದೆನೋ ಬಂಧು
ಎನ್ನ ಪಾಲಿಸೋ ಬೇಗ ಬಂದು
ಮನ್ನಿಸಯ್ಯ ಕೃಪಾಸಿಂಧು ॥
ದಿನವು ಕಳೆದು ಹೋಯಿತಲ್ಲಾ
ಪ್ರಾಣೇಶ ವಿಟ್ಠಲಾ
ಮನ್ನಿಸುವರು ಒಬ್ಬರಿಲ್ಲ
ಕಾಯೋ ಬಾಲಗೋಪಾಲ ॥