← ಶ್ರೀಕೃಷ್ಣ

ಸಕಲಭಯ ತಲ್ಲಣವ

📂 ಶ್ರೀಕೃಷ್ಣ
✍️ ವಚನವೇದ
🏷️ ಕೀರ್ತನೆಗಳು
🎵 ರಾಗ: ಸಾಹಾನಾ
🥁 ತಾಳ: ಝಪತಾಲ
ಸಕಲಭಯ ತಲ್ಲಣವ ಪರಿಹರಿಪ ಮಹಿಮನನು
ಒಮ್ಮೆಯಾದರು ಏಕೆ ಕರೆಯದಿರುವೆ |
ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ
ಏನೀ ವಿಡಂಬನೆಯು ನಿನಗೆ ತರವೇ ||
ಜನಧನದ ಸಂಗದಲಿ ಅವನ ಮರೆಯದ ತೆರದಿ
ಎಚ್ಚರಿರು ಭ್ರಮೆಯನ್ನು ಅತ್ತ ದೂಡು |
ನಿಜವನಾರಾಧಿಸಲು ಸರ್ವಪಾಪವಿಮುಕ್ತ
ನನ್ನ ಮಾತಿನ ನಿಜವನಳೆದು ನೋಡು ||
ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ
ಅಳಿಯಾಸೆಗಳ ತೊರೆದು ಹರಿಯ ನುತಿಸು |
ದೇಹಮನಪ್ರಾಣಗಳ ಅವನಿಗರ್ಪಿತ ಮಾಡಿ
ಪ್ರೇಮದಾರಾಧನೆಗೆ ಮನವ ಸಲಿಸು ||
← ಶ್ರೀಕೃಷ್ಣ ವಚನವೇದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.