← ಶ್ರೀಕೃಷ್ಣ
ಸಕಲಭಯ ತಲ್ಲಣವ
ಸಕಲಭಯ ತಲ್ಲಣವ ಪರಿಹರಿಪ ಮಹಿಮನನು
ಒಮ್ಮೆಯಾದರು ಏಕೆ ಕರೆಯದಿರುವೆ |
ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ
ಏನೀ ವಿಡಂಬನೆಯು ನಿನಗೆ ತರವೇ ||
ಒಮ್ಮೆಯಾದರು ಏಕೆ ಕರೆಯದಿರುವೆ |
ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ
ಏನೀ ವಿಡಂಬನೆಯು ನಿನಗೆ ತರವೇ ||
ಜನಧನದ ಸಂಗದಲಿ ಅವನ ಮರೆಯದ ತೆರದಿ
ಎಚ್ಚರಿರು ಭ್ರಮೆಯನ್ನು ಅತ್ತ ದೂಡು |
ನಿಜವನಾರಾಧಿಸಲು ಸರ್ವಪಾಪವಿಮುಕ್ತ
ನನ್ನ ಮಾತಿನ ನಿಜವನಳೆದು ನೋಡು ||
ಎಚ್ಚರಿರು ಭ್ರಮೆಯನ್ನು ಅತ್ತ ದೂಡು |
ನಿಜವನಾರಾಧಿಸಲು ಸರ್ವಪಾಪವಿಮುಕ್ತ
ನನ್ನ ಮಾತಿನ ನಿಜವನಳೆದು ನೋಡು ||
ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ
ಅಳಿಯಾಸೆಗಳ ತೊರೆದು ಹರಿಯ ನುತಿಸು |
ದೇಹಮನಪ್ರಾಣಗಳ ಅವನಿಗರ್ಪಿತ ಮಾಡಿ
ಪ್ರೇಮದಾರಾಧನೆಗೆ ಮನವ ಸಲಿಸು ||
ಅಳಿಯಾಸೆಗಳ ತೊರೆದು ಹರಿಯ ನುತಿಸು |
ದೇಹಮನಪ್ರಾಣಗಳ ಅವನಿಗರ್ಪಿತ ಮಾಡಿ
ಪ್ರೇಮದಾರಾಧನೆಗೆ ಮನವ ಸಲಿಸು ||