← ವೈರಾಗ್ಯ

ಯಾರಿಗೆ ಯಾರುಂಟು ಎರವಿನ ಸಂಸಾರ

📂 ವೈರಾಗ್ಯ
✍️ ಪುರಂದರದಾಸ
🏷️ ಕೀರ್ತನೆಗಳು
🎵 ರಾಗ: ಮಾಂಡ್
🥁 ತಾಳ: ತ್ರಿತಾಲ
ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ॥

ಬಾಯಾರಿತು ಎಂದು ಬಾವಿ ನೀರಿಗೆ ಪೋದೆ
ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೇ ॥

ಬಿಸಿಲುಗಾಳಿಗಾಗಿ ಮರದ ಛಾಯೆಗೆ ಪೋದೆ
ಮರ ಬಗ್ಗಿ ಶಿರದ ಮೇಲೊರಗಿತು ಹರಿಯೇ ॥

ತಂದೆ ಶ್ರೀಪುರಂದರ ವಿಟ್ಠಲ ನಾರಾಯಣ
ನಾ ಹೋಗೋ ಹೊತ್ತಿಗೆ ನೀ ಕಾಯೋ ಹರಿಯೇ ॥
← ವೈರಾಗ್ಯ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.