← ಶ್ರೀಕೃಷ್ಣ
ತೋರೆ ಬೇಗನೆ ಸಖಿ
ತೋರೆ ಬೇಗನೆ ಸಖಿ
ತೋರ ಮುತ್ತಿನ ಹಾರ ಭಾರವಾಗಿದೆ ನನಗೆ ||ಪ||
ಈರೇಳು ಲೋಕವ ಪೊರೆವ ದಯಾನಿಧಿ
ಬಾರನೇತಕೆ ಮನೆಗೆ ಹೇ ಸಖಿಯೆ ||ಅ||
ತರಣಿತನಯಸುತನ ಬಾಯೊಳನೃತವ
ಭರದಿಂದ ನುಡಿಸಿದನ
ತರಣಿಸುತನ ಬಾಣವೆರಗದಂದದಿ ರಥವ
ಧರೆಗೆ ಒತ್ತಿದ ದೇವನ
ತರಣಿಯ ಮರೆಮಾಡಿ ಶಿರವ ತರಿಯುವಂತೆ
ನರಗೆ ಸೂಚಿಸಿದಾತನ
ತರಣಿಯೊಡನೆ ಪಂಥವಾಡಿ ತಿರುಗಿದ
ತರಳನಾಳಿದನ ತೋರಿಸೆ ಹೇ ಸಖಿಯೆ ||1||
ಗೋತ್ರಭೇದಿ ಸುತನ ಸುತನ ಸತಿಯ
ಮಾತುಳನಾದವನ
ಕತ್ತಲೆಯಲಿ ಪೋಗಿ ಕುತ್ತಿಟ್ಟವನ ಮೈಯ
ಸುತ್ತಿ ಬಾಧಿಸುತಿಪ್ಪನ
ತತ್ತ್ವವರಿತು ಸುತತ್ತ್ವ ಬೋಧಿಸಿ
ಉತ್ತರವಿತ್ತವನ
ಮುತ್ತಯ್ಯನ ತಾಯ ಪೆತ್ತ ದೇವನ ಎನ್ನ
ಹತ್ತಿರ ಕರೆದು ತಾರೆ, ಹೇ ಸಖಿಯೆ ||2||
ವರಮುನಿಗಳು ಕೂಡಿ ಸರ್ವೋತ್ತಮನಾರೊ
ಪರಿಶೋಧಿಸಬೇಕೆಂದು
ಭರದಿಂದ ಭೃಗು ಮುನಿ ಬಂದು ಕೋಪಿಸೆ ಬೇಗ
ಚರಣವನೊತ್ತಿದನ
ಪರಿಪರಿಯಲಿ ದೇವ ಪರಮ ಭಕ್ತರ ಕಾವ
ಸುರರಿಗಭಯವಿತ್ತನ
ವರವೇಲಾಪುರದಾದಿ ಕೇಶವನ
ಮರೆಯಲಾರೆನೆ ಮನದಿ- ಹೇ ಸಖಿಯೆ ||3||
ತೋರ ಮುತ್ತಿನ ಹಾರ ಭಾರವಾಗಿದೆ ನನಗೆ ||ಪ||
ಈರೇಳು ಲೋಕವ ಪೊರೆವ ದಯಾನಿಧಿ
ಬಾರನೇತಕೆ ಮನೆಗೆ ಹೇ ಸಖಿಯೆ ||ಅ||
ತರಣಿತನಯಸುತನ ಬಾಯೊಳನೃತವ
ಭರದಿಂದ ನುಡಿಸಿದನ
ತರಣಿಸುತನ ಬಾಣವೆರಗದಂದದಿ ರಥವ
ಧರೆಗೆ ಒತ್ತಿದ ದೇವನ
ತರಣಿಯ ಮರೆಮಾಡಿ ಶಿರವ ತರಿಯುವಂತೆ
ನರಗೆ ಸೂಚಿಸಿದಾತನ
ತರಣಿಯೊಡನೆ ಪಂಥವಾಡಿ ತಿರುಗಿದ
ತರಳನಾಳಿದನ ತೋರಿಸೆ ಹೇ ಸಖಿಯೆ ||1||
ಗೋತ್ರಭೇದಿ ಸುತನ ಸುತನ ಸತಿಯ
ಮಾತುಳನಾದವನ
ಕತ್ತಲೆಯಲಿ ಪೋಗಿ ಕುತ್ತಿಟ್ಟವನ ಮೈಯ
ಸುತ್ತಿ ಬಾಧಿಸುತಿಪ್ಪನ
ತತ್ತ್ವವರಿತು ಸುತತ್ತ್ವ ಬೋಧಿಸಿ
ಉತ್ತರವಿತ್ತವನ
ಮುತ್ತಯ್ಯನ ತಾಯ ಪೆತ್ತ ದೇವನ ಎನ್ನ
ಹತ್ತಿರ ಕರೆದು ತಾರೆ, ಹೇ ಸಖಿಯೆ ||2||
ವರಮುನಿಗಳು ಕೂಡಿ ಸರ್ವೋತ್ತಮನಾರೊ
ಪರಿಶೋಧಿಸಬೇಕೆಂದು
ಭರದಿಂದ ಭೃಗು ಮುನಿ ಬಂದು ಕೋಪಿಸೆ ಬೇಗ
ಚರಣವನೊತ್ತಿದನ
ಪರಿಪರಿಯಲಿ ದೇವ ಪರಮ ಭಕ್ತರ ಕಾವ
ಸುರರಿಗಭಯವಿತ್ತನ
ವರವೇಲಾಪುರದಾದಿ ಕೇಶವನ
ಮರೆಯಲಾರೆನೆ ಮನದಿ- ಹೇ ಸಖಿಯೆ ||3||