← ಜಾನಪದ ಗೀತೆ

ಲೋಕದ ಕಾಳಜಿ ಮಾಡತೇನಂತಿ

📂 ಜಾನಪದ ಗೀತೆ
✍️ ಶಿಶುನಾಳ ಷರೀಫ್
🏷️ ಜಾನಪದ ಗೀತೆ
ಲೋಕದ ಕಾಳಜಿ ಮಾಡತೇನಂತಿ ನೀ
ಯಾರು ಬ್ಯಾಡಾಂತಾರ ಮಾಡಪ್ಪ ಚಿಂತಿ ||

ನೀ ಮಾಡೋದು ಘಳಿಗಿ ಸಂತಿ
ಮೇಲು ಮಾಳಗಿ ಕಟ್ಟಬೇಕಂತಿ
ಆನೆ ಅಂಬಾರಿ ಏರಬೇಕಂತಿ
ಮಣ್ಣಲಿ ಇಳಯೊದ ಥಣ್ಣಗ ಮರತಿ ||

ಬದುಕು ಬಾಳೆವು ನಂದೆ ಅಂತೀ
ನಿಧಿ ಸೇರಿದಷ್ಟೂ ಸಾಲದು ಅಂತಿ
ಕದವ ತೆರೆದು ಕಡೆಯಾತ್ರೆಗೆ ನಡೆವಾಗ
ಒದಗದು ಯಾವುದೋ ಸುಮ್ಮನೆ ಅಳತಿ ||

ನೆಲೆಯು ಗೊವಿಂದನ ಪಾದದೋಳೈತಿ
ಅಲಕೊಂಡು ಹುಡುಕಿದರಿನ್ನೆಲ್ಲೈತಿ?
ಶಿಶುನಾಳುಧೀಶನ ದಯೆಯೊಳಗೈತಿ
ರಸಿಕನು ಹಾಡಿದ ಕವಿತೆಯೊಳೈತಿ ||
← ಜಾನಪದ ಗೀತೆ ಶಿಶುನಾಳ ಷರೀಫ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.