← ಶ್ರೀಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕರ ವಿಶ್ವ ಸಂದೇಶವು
🎧
ಶ್ರವಣ ಮಾಡಿ
ಸುರಮಣಿ ಶ್ರೀ ದತ್ತಾತ್ರೇಯ ವೇಲಣಕರ
ಸ್ವಾಮಿ ವಿವೇಕರ ವಿಶ್ವಸಂದೇಶವು
ಸಂಘರೂಪದಲಿ ಮೂಡಿಹುದು |
ಸಂಘದ ಗುಡಿಯೊಳು ರಾಮಕೃಷ್ಣ ಗುರು
ಮೂರ್ತಿಯಂದದಲಿ ಶೋಭಿಪರು ||
ಭಾರತ ದೇಶದ ದಿವ್ಯ ಪರಂಪರೆ
ತಳಹದಿಯದರ ಆಗಿಹುದು |
ಮಾನವಸೇವೆಯೆ ಭಿತ್ತಿಕಂಬಗಳು
ಆತ್ಮಮುಕ್ತಿಯೆ ಗೋಪುರವು ||
ತ್ಯಾಗವೇ ಅದರ ಮಹಾದ್ವಾರವು
ಸಾಧನ ಜೀವನ ಪ್ರಾಂಗಣವು |
ಸಕಲ ಕ್ರಿಯೆಗಳೇ ಪೂಜಾ ಪರಿಕರ
ಆತ್ಮಸಮರ್ಪಣವಾರತಿಯು ||
ಸಂಘರೂಪದಲಿ ಮೂಡಿಹುದು |
ಸಂಘದ ಗುಡಿಯೊಳು ರಾಮಕೃಷ್ಣ ಗುರು
ಮೂರ್ತಿಯಂದದಲಿ ಶೋಭಿಪರು ||
ಭಾರತ ದೇಶದ ದಿವ್ಯ ಪರಂಪರೆ
ತಳಹದಿಯದರ ಆಗಿಹುದು |
ಮಾನವಸೇವೆಯೆ ಭಿತ್ತಿಕಂಬಗಳು
ಆತ್ಮಮುಕ್ತಿಯೆ ಗೋಪುರವು ||
ತ್ಯಾಗವೇ ಅದರ ಮಹಾದ್ವಾರವು
ಸಾಧನ ಜೀವನ ಪ್ರಾಂಗಣವು |
ಸಕಲ ಕ್ರಿಯೆಗಳೇ ಪೂಜಾ ಪರಿಕರ
ಆತ್ಮಸಮರ್ಪಣವಾರತಿಯು ||