← ಶ್ರೀಸ್ವಾಮಿ ವಿವೇಕಾನಂದ

ರಾಮಕೃಷ್ಣದಿಗಂತದಲಿ

📂 ಶ್ರೀಸ್ವಾಮಿ ವಿವೇಕಾನಂದ
✍️ ಹೆಚ್ ಎನ್ ಮುರಳೀಧರ
🏷️ ಕೀರ್ತನೆಗಳು
🎵 ರಾಗ: ಭೂಪಾಲೀ
🥁 ತಾಳ: ದಾದರಾ
🎧
ಶ್ರವಣ ಮಾಡಿ
ವಿದ್ವಾನ್ ಶ್ರೀ ಗುರುರಾಜ್
ರಾಮಕೃಷ್ಣದಿಗಂತದಲಿ
ಅರುಣಕಿರಣ ಹೊಮ್ಮಲು
ಮೂಡಿಬಂದ ತ್ಯಾಗರವಿಯೆ
ಬೆಳಕ ಹರಡಿ ಸುತ್ತಲು |

ಗುರುವಿನಡಿಯೆ ಮಲ್ಲಸಾಲೆ-
ಶಿಲೆಯು ಶಿಲ್ಪವಾಯಿತು;
ನೂರು ಪ್ರಶ್ನೆ ಕರಗಿ ಉರಿದು
ಜ್ಯೋತಿ ಜಗವ ತುಂಬಿತು |

ಉತ್ಸವರಥವೇರಿ ಜಗವ
ಸುತ್ತಿಬಂದ ಸ್ಫೂರ್ತಿಯೇ;
ಶ್ರೀಗುರುವಿನ ಧವಳಕೀರ್ತಿ-
ಧ್ವಜವ ಮೆರೆದ ಮೂರ್ತಿಯೆ |

ಎನ್ನೆದೆಯೊಳು ಉದಯಿಸಿಂದು,
ಕಾಳರಾತ್ರಿ ಕಳೆಯಲಿ;
ಕಿರಣಜಲದಿ ಜೀವ ನೆನೆದು
ಪುಳಕಾಂಕುರ ಬೆಳೆಯಲಿ |
← ಶ್ರೀಸ್ವಾಮಿ ವಿವೇಕಾನಂದ ಹೆಚ್ ಎನ್ ಮುರಳೀಧರ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.