← ಶ್ರೀಕೃಷ್ಣ

ನಡತೆಹೀನನಾದರೇನಯ್ಯ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕಾಫಿ
🥁 ತಾಳ: ಆಟತಾಳ
ನಡತೆಹೀನನಾದರೇನಯ್ಯ - ಜಗ
ದೊಡೆಯನ ಭಕುತಿ ಇದ್ದರೆ ಸಾಲದೆ ||ಪ||

ಪುಂಡರಾ ಪಾಂಡುನಂದನರು ಮತ್ತದರೊಳು
ಕಂಡೋರ್ವಳನೈವರು ಭೋಗಿಪರು
ಖಂಡಿಸಿದರು ರಣದೊಳು ಗುರುಹಿರಿಯರ
ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ||1||

ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ
ಕಂದನ ನಿರ್ಬಂಧಿಸುತಿರಲು
ಅಂದು ಸಾಧಿಸಲು ಕಂಬದ ಬಳಿಯೆ ತನ್ನ
ತಂದೆಯ ಕೊಲಿಸಿದನೆಂಬರು ಜನರು ||2||

ದಾಸಿಯ ಜಠರದೊಳು ಜನಿಸಿದ ವಿದುರ - ಸ
ನ್ಯಾಸಿಯೆಂದೆನಿಸಿಕೊಂಡ
ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ
ಕೇಶವನ ಭಕುತಿಯೊಂದಿದ್ದರೆ ಸಾಲದೆ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.