← ಶ್ರೀಕೃಷ್ಣ
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನು
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನು
ಏನೆಂದು ಸ್ತುತಿ ಮಾಡಲರಿಯೆ
ಹರಿ ಮುಕುಂದನು ನೀನು ನರಜನ್ಮ ಹುಳು ನಾನು
ಪರಮಪುರುಷನು ನೀನು ಪಾಪಿ ನಾನು
ಗರುಡ ಗಮನನು ನೀನು ದುರುಳ ಕರ್ಮಿಯು ನಾನು
ಪರಂಜ್ಯೋತಿಯು ನೀನು ಪಾಮರನು ನಾನು ||1||
ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನು
ಕ್ಷಣಕ್ಷಣಕೆ ಅವಗುಣದ ಕರ್ಮಿ ನಾನು
ವನಜಸಂಭವನಯ್ಯ ವೈಕುಂಠಪತಿ ನೀನು
ತನುವು ಸ್ಥಿರವಲ್ಲದ ನರಬೊಂಬೆ ನಾನು ||2||
ಕಂಬದಲಿ ಬಂದಂಥ ಆನಂದಪತಿ ನೀನು
ನಂಬಿಗಿಲ್ಲದ ನಿರ್ಜೀವಿ ನಾನು
ಅಂಬರೀಷಗೆ ಒಲಿದ ದುರಿತ ದೂರನು ನೀನು
ಡಂಬಕದ ಮಾಯಾ ಶರೀರಿ ನಾನು ||3||
ವಾರಿಧಿಶಯನ ಭೂರಿ ಕಾರುಣ್ಯಪತಿ ನೀನು
ಘೋರತರ ಕಾಮಕ್ರೋಧಿಯು ನಾನು
ಈರೇಳು ಲೋಕವನು ಪೊಡೆಯಲಿಟ್ಟವ ನೀನು
ಸಾರಿ ಭಜಿಸದ ದುಷ್ಟ ಕರ್ಮಿ ನಾನು ||4||
ತಿರುಪತಿಯೊಳು ನೆಲಸಿದ ವೆಂಕಟೇಶನು ನೀನು
ಚರಣಕೆರಗುವ ಕನಕದಾಸನು ನಾನು
ಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ
ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ ||5||
ಏನೆಂದು ಸ್ತುತಿ ಮಾಡಲರಿಯೆ
ಹರಿ ಮುಕುಂದನು ನೀನು ನರಜನ್ಮ ಹುಳು ನಾನು
ಪರಮಪುರುಷನು ನೀನು ಪಾಪಿ ನಾನು
ಗರುಡ ಗಮನನು ನೀನು ದುರುಳ ಕರ್ಮಿಯು ನಾನು
ಪರಂಜ್ಯೋತಿಯು ನೀನು ಪಾಮರನು ನಾನು ||1||
ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನು
ಕ್ಷಣಕ್ಷಣಕೆ ಅವಗುಣದ ಕರ್ಮಿ ನಾನು
ವನಜಸಂಭವನಯ್ಯ ವೈಕುಂಠಪತಿ ನೀನು
ತನುವು ಸ್ಥಿರವಲ್ಲದ ನರಬೊಂಬೆ ನಾನು ||2||
ಕಂಬದಲಿ ಬಂದಂಥ ಆನಂದಪತಿ ನೀನು
ನಂಬಿಗಿಲ್ಲದ ನಿರ್ಜೀವಿ ನಾನು
ಅಂಬರೀಷಗೆ ಒಲಿದ ದುರಿತ ದೂರನು ನೀನು
ಡಂಬಕದ ಮಾಯಾ ಶರೀರಿ ನಾನು ||3||
ವಾರಿಧಿಶಯನ ಭೂರಿ ಕಾರುಣ್ಯಪತಿ ನೀನು
ಘೋರತರ ಕಾಮಕ್ರೋಧಿಯು ನಾನು
ಈರೇಳು ಲೋಕವನು ಪೊಡೆಯಲಿಟ್ಟವ ನೀನು
ಸಾರಿ ಭಜಿಸದ ದುಷ್ಟ ಕರ್ಮಿ ನಾನು ||4||
ತಿರುಪತಿಯೊಳು ನೆಲಸಿದ ವೆಂಕಟೇಶನು ನೀನು
ಚರಣಕೆರಗುವ ಕನಕದಾಸನು ನಾನು
ಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ
ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ ||5||