← ಶ್ರೀಕೃಷ್ಣ

ಈತನೀಗ ಭಾರತೀಶನು ತನ್ನ ಪ್ರೀತಿಸುವರ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಈತನೀಗ ಭಾರತೀಶನು ತನ್ನ ಪ್ರೀತಿಸುವರ |
ಮನದ ಮಾತು ಸಲಿಸಿ ಮುಕುತಿ ಈವ
ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ |
ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ ||

ಮುರಿದು ಧರೆಗೆ ವರಿಸಿದಾತಾ ಅಪ
ಧುರದೊಳಕ್ಷನ ಹರಣವಳಿದು |
ಗುರುವರ್ಹತ್ತುಶಿರನ ಜರಿದು ||
ಸರ್ರನೆ ನಗರ ಉರುಪಿ ಮರಳಿ |
ಹರಿಯ ಚರಣಕ್ಕೆರಗಿದಾತಾ ||1||

ಕುರುನಿಕರ ಕರುಬಿ ಬೊ-|
ಬ್ಬಿರಿದು ನಿಂದುರವಣಿಸಿ ಎದುರಾ-||
ದರಿಗಳ ಶಿರ ತರಿದು ತಳೋ-|
ದರಿಯ ಹರುಷಬಡಿಸಿದಾತಾ||2||

ಕರಿಯ ತೆರದಿ ದುಷ್ಟ ಸಂಕರನು |
ತಿರುಗಲವನ ಮುರಿದು ಮತ್ತೆ ||
ಮರುತಮತದ ಬಿರುದನೆತ್ತಿ - |
ಪರನೆ ವಿಜಯವಿಠ್ಠಲನೆಂದಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.