← ಶ್ರೀಕೃಷ್ಣ

ಎಲೆ ಮನ ಮುರಾರಿಯನು ಕೊಂಡಾಡು

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಎಲೆ ಮನ ಮುರಾರಿಯನು ಕೊಂಡಾಡು
ಸಾಧನಕಿದು ಉಪಾಯ ನೋಡು

ಕಾಲನ ದೂತರ ಕಾಲಿಗೆ ಬಿದ್ದರೆ |
ನಾಳೆಗೆ ನಿಲುವರೆ ನೋಡು ||1||

ಮಂದಿಯ ಮಾತಿಗೆ ಎಂದೆಂದು ಮರುಗದೆ |
ಮುಂದಿನ ಗತಿ ನೀ ನೋಡು ||2||

ರಾಜೀವ ಮುಖಿಯರ ಸೋಜಿಗ ಮೆಚ್ಚದೆ |
ವಿಜಯವಿಠಲನ ಪಾಡೋ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.